Aug 18, 2011

ವಿಜಾಪುರ


ಮೊನ್ನೆಯಷ್ಟೇ ವಿಜಾಪುರದಿಂದ ಬಂದೆ... ನನ್ನ ತಂದೆಗೆ ವಿಜಾಪುರಕ್ಕೆ ವರ್ಗವಾಗಿರುವ ಕಾರಣ ನನಗೆ ವಿಜಾಪುರ ನೋಡಲು ಅವಕಾಶ ಸಿಕ್ಕಿದೆ ಜೊತೆಗೆ ಅಲ್ಲಿನ ಇತಿಹಾಸ ಪ್ರಸಿದ್ದ ಸ್ಮಾರಕಗಳನ್ನು ನೋಡುವ ಅವಕಾಶ ಕೂಡ ಸಿಕ್ಕಿದೆ.

 ಹಿಂದೆ '' ವಿಜಯಪುರ '' ಎಂದು ಕರೆಸಿಕೊಂಡ ವಿಜಾಪುರವನ್ನು '' ಕಲ್ಯಾಣದ ಚಾಲುಕ್ಯರು '' ಸ್ಥಾಪಿಸಿದರು. ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾದ ವಿಜಾಪುರ ನಂತರ ಮರಾಠ ಮತ್ತು ಬ್ರಿಟಿಷರ ಕೈಗೆ ಬಂತು. 

ಇದು ಕರ್ನಾಟಕದ ಗಡಿ ಭಾಗವಾಗಿದ್ದು. ಮಹಾರಾಷ್ಟ್ರದೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ.  ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ '' ಪಂಚನದಿಗಳ ಬೀಡು '' ಎಂದು ಕರೆಯುತ್ತಾರೆ. 

'' ಕಾಯಕವೇ ಕೈಲಾಸ '' ಎಂದ ಬಸವಣ್ಣ ಹುಟ್ಟಿದ ಊರು ಬಸವನ ಬಾಗೇವಾಡಿ ವಿಜಾಪುರದಲ್ಲಿದೆ. 

ಇಲ್ಲಿನ ಇತಿಹಾಸ ಪ್ರಸಿದ್ದ ಸ್ಥಳಗಳು ಇಂತಿವೆ :

ಗೋಲ್ ಗುಂಬಜ್ : ಇದು ಮಹಮದ್ ಆದಿಲ್ ಶಾ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ.

ಇತರ ಆಕರ್ಷಣೆಗಳು : ಇಬ್ರಾಹಿಮ್ ರೌಜಾ, ಬಾರಾ ಕಮಾನು, ಸಂಗೀತ ಮಹಲ್.







ಹೆಚ್ಚಿನ ಚಿತ್ರಗಳನ್ನು ನೋಡಲು ಈ ಲಿಂಕನ್ನು ಕ್ಲಿಕ್ಕಿಸಿ 




Mar 31, 2011

INDIA vs Pakistan


ನಿನ್ನೆ ಭಾರತ ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನವನ್ನು ಅತ್ಯಂತ ರೋಮಾಂಚಕಾರಿಯಾಗಿ ಸೋಲಿಸಿ ಈ ವಿಶ್ವ ಕಪ್ ನ ಫೈನಲ್ ಗೆ ಲಗ್ಗೆ ಇಟ್ಟಿದೆ. 

ಭಾರತ ಪಾಕಿಸ್ತಾನ ಪಂದ್ಯ ಅಂದರೆ ಯಾವಾಗಲೂ high tension ಪಂದ್ಯಗಳು. ಅದರಲ್ಲೂ ಈ ಪಂದ್ಯ ಸೆಮಿ ಫೈನಲ್. ಭಾರತ ಪಾಕಿಸ್ತಾನ ಪಂದ್ಯ ಅಂದರೆ ಹಣ ಹೊಳೆಯಾಗಿ ಹರಿಯುತ್ತದೆ .ಸಾವಿರಾರು ಕೋಟಿ ರೂಪಾಯಿ ಬೆಟ್ಟಿಂಗ್ ಸಾಮಾನ್ಯ. ಯಾವುದೇ ದೇಶದಲ್ಲಿ ನಡೆದರೂ ಕ್ರೀಡಾಂಗಣಗಳು ತುಂಬಿ ತುಳುಕುತ್ತವೆ. ವೀಕ್ಷಕರ ಕೂಗಾಟ, ಚೀರಾಟ ಗಳ ಮದ್ಯೆ ಕ್ರಿಕೆಟ್ ಆಡುವುದು ಯಾವ ತಂಡಕ್ಕೂ ಸವಾಲೇ ಸರಿ... ಭಾರತ ಪಾಕಿಸ್ತಾನ ಗಳ ಪಂದ್ಯದಲ್ಲಿ ತಮ್ಮ ದೇಶ ಸೋಲುವುದನ್ನು ಆ ದೇಶದ ಜನರು ಎಂದಿಗೂ ಸಹಿಸುವುದಿಲ್ಲ. ಯಾವ ತಂಡ ಈ ಎಲ್ಲಾ Pressure ಮೆಟ್ಟಿ ನಿಲ್ಲುವುದೋ ಅದೇ ಜಯಿಸುತ್ತದೆ. 

ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಅಲ್ಲಿ ಪರಸ್ಪರ ಬಯ್ಯುವುದು, ಕೆಣಕುವುದು ಸಾಮಾನ್ಯ ಸಂಗತಿ. ಜನರೂ ಕೂಡ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು ಇದೆ. ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಸಾಮಾನ್ಯವಾಗಿ ನೆನಪಿಗೆ ಬರುವುದು ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯ. ಪಾಕಿಸ್ತಾನದ ನಾಯಕ ಅಮೀರ್ ಸೋಹೈಲ್ ನಮ್ಮ ವೆಂಕಟೇಶ್ ಪ್ರಸಾದ್ ಗೆ ಬೌಂಡರಿ ಬಾರಿಸಿ ಕೆಣಕಿದ್ದು, ನಂತರದ ಎಸೆತದಲ್ಲೇ ಸೋಹೈಲ್ ರನ್ನು ಬೌಲ್ಡ್ ಮಾಡಿದ್ದು ಯಾವತ್ತಿಗೂ ಕ್ರಿಕೆಟ್ ಪ್ರೇಮಿ ಮರೆಯಲಾರ.

ನಿನ್ನೆ ನಡೆದ ಪಂದ್ಯ ಅದಕ್ಕಿಂತ ಮಹತ್ವದ್ದಾಗಿತ್ತು. ಫೈನಲ್ ಗೆ ಹೋಗಲು ಎರಡು ತಂಡಗಳು ಮದಗಜಗಳಂತೆ ಕಾದಾಡುವುದು ಖಚಿತವಾಗಿತ್ತು. ಭಾರತಕ್ಕೆ ತನ್ನದೇ ದೇಶದಲ್ಲಿ ಆಡುವ ಅನುಕೂಲವಿತ್ತು. ಎರಡು ದೇಶದ ಜನರಿಗೆ ತಮ್ಮ ನೆಚ್ಚಿನ ತಂಡ ವಿಶ್ವ ಕಪ್ ಫೈನಲ್ ಗೆಲ್ಲದಿದ್ದರೂ ಪರವಾಗಿಲ್ಲ, ಈ ಪಂದ್ಯ ಗೆಲ್ಲಬೇಕು. ತಮ್ಮ ತಂಡ ಸೋಲುವುದನ್ನು ಯಾರೂ ಸಹಿಸಲಾರರು. 

ಅನೇಕ ವರ್ಷಗಳ ನಂತರ ನಡೆಯುತ್ತಿರುವ ಈ  ಕಟ್ಟಾ ವಿರೋಧಿಗಳ ಪಂದ್ಯದ ಬಗ್ಗೆ ಜನ ಎಷ್ಟು ಹುಚ್ಚಿಗೆ ಬಿದ್ದಿದ್ದರೆಂದರೆ, ಆಫೀಸಿಗೆ ರಜಾ ಹಾಕಿದ್ದರು. ಕೆಲವು ಕಂಪನಿ ಗಳು ತಮ್ಮ ಉದ್ಯೋಗಿಗಳಿಗೋಸ್ಕರ ಮ್ಯಾಚ್ ನ live telecast ಅನ್ನು ಕಂಪನಿ ಅಲ್ಲೇ ವ್ಯವಸ್ತೆ ಮಾಡಿದ್ದವು. ಅಂಗಡಿಗಳು ಮುಚ್ಚಿದ್ದವು. ರೋಡುಗಳು, ಸಿನೆಮಾ ಥಿಯೇಟರ್ ಗಳು ಖಾಲಿ ಹೊಡೆಯುತ್ತಿದ್ದವು 

ಅತ್ಯಂತ ರೋಮಾಂಚಕಾರಿಯಾಗಿ ನಡೆದ ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೨೯ ರನ್ ಗಳಿಂದ ಸೋಲಿಸಿ ಮುಂಬೈ ಗೆ ತನ್ನ ಟಿಕೆಟ್ ಬುಕ್ ಮಾಡಿತು. ಪಾಕಿಸ್ತಾನ ಕ್ಯಾಚ್ ಜೊತೆ ಮ್ಯಾಚ್ ಅನ್ನೂ ಕೈಚೆಲ್ಲಿತ್ತು . ಈ ಪಂದ್ಯ ನೋಡಲು ಭಾರತ ಮತ್ತು ಪಾಕಿಸ್ತಾನದ ಪ್ರಧಾನಿ ಯಿಂದ ಹಿಡಿದು ಅನೇಕ celebrities ಬಂದಿದ್ದರು. 

ಜನರಿಗೆ ಭಾರತ ಯುದ್ದವೇ ಗೆದ್ದಷ್ಟು ಖುಷಿಯಾಗಿ ರಸ್ತೆಗಿಳಿದು ಹುಚ್ಚೆದ್ದು ಕುಣಿದು ವಿಜಯೋತ್ಸವ ಆಚರಿಸಿದರು. 

ಇನ್ನುಯಾವಾಗ ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಪಂದ್ಯ ನಡೆಯುವುದೋ? 

ಇನ್ನೂ ಎರಡೇ ದಿನಕ್ಕೆ ಭಾರತ ಮತ್ತು ಶ್ರೀಲಂಕ ಮುಂಬೈನಲ್ಲಿ ವಿಶ್ವ ಕಪ್ ಗೆಲ್ಲಲು ಫೈನಲ್ನಲ್ಲಿ ಕಾದಾಡಲಿವೆ. ಮುಂಬೈ ನಲ್ಲಿ ಲಂಕಾ ದಹನ ಆಗುವುದೇ??? ಸಚಿನ್ ತಮ್ಮ home ground ನಲ್ಲಿ ೧೦೦ ನೇ ಶತಕ ಗಳಿಸುವರೇ??

Mar 21, 2011

ವಿಶ್ವಕಪ್ 2011 ಭಾಗ 2


ವಿಶ್ವ ಕಪ್ ಲೀಗ್ ಪಂದ್ಯಗಳು ಮುಗಿದಿವೆ. ವಿಶ್ವ ಕ್ರಿಕೆಟ್ ನ  ಬಲಿಷ್ಠ ತಂಡಗಳೇ ಕ್ವಾರ್ಟರ್ ಫೈನಲ್ ನಲ್ಲಿ ಭೇಟಿಯಾಗಲಿವೆ. 
ಭಾರತ ವಿಶ್ವವಿಜೇತರಾದ ಆಸ್ಟ್ರೇಲಿಯಾ ವಿರುದ್ದ ಕ್ವಾರ್ಟರ್ ಫೈನಲ್ ಆಡಲಿದೆ. ಆಸ್ಟ್ರೇಲಿಯಾ ಈಗ ಮೊದಲಿನ ಅಜೇಯ ತಂಡವಾಗಿ ಉಳಿದಿಲ್ಲಾ, ಅದನ್ನ ಶ್ರೀಲಂಕ, ಪಾಕಿಸ್ತಾನ, ಇಂಗ್ಲೆಂಡ್ ಅಷ್ಟೇ ಏಕೇ ಭಾರತ ಕೂಡ ಅವರ ದೇಶದಲ್ಲಿ ಸೋಲಿಸಿದ್ದಾರೆ. 

೧೯೯೬ ರ ವಿಶ್ವ ಕಪ್ ನಲ್ಲಿ ಭಾರತ ಕ್ವಾರ್ಟರ್ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ದ ಬೆಂಗಳೂರಿನಲ್ಲಿ ಗೆದ್ದಿತ್ತು. ಈ ಸಲ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ. ಈ ತಂಡದ ವಿಜೇತರು ಪಾಕಿಸ್ತಾನ ಮತ್ತು ವೆಸ್ಟ್ ಇಂಡಿಸ ಪಂದ್ಯದ ವಿಜೇತರನ್ನು ಎದುರಿಸಲಿವೆ. ಎಲ್ಲರು ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಮತ್ತು ಪಾಕಿಸ್ತಾನ ವೆಸ್ಟ್ ಇಂಡಿಸ ತಂಡವನ್ನು ಸೋಲಿಸಿ ಸೆಮಿ ಫೈನಲ್ ನಲ್ಲಿ ಎದುರಿಸುವಂತಾಗಬೇಕು ಎಂದು ಆಶಿಸುತ್ತಿದ್ದಾರೆ. 

ಭಾರತಕ್ಕೆ ಬ್ಯಾಟಿಂಗ್ ಗಿಂತ ಬೌಲಿಂಗೆ ಚಿಂತೆಯ ವಿಷಯವಾಗಿದೆ. ಜಹೀರ್ ಖಾನ್ ಒಬ್ಬರೇ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಹರ್ಭಜನ್, ನೆಹ್ರಾ, ಮುನಾಫ್ , ಚಾವ್ಲಾ ಎಲ್ಲಾರೂ ಫಾರ್ಮ್ ಕಳೆದುಕೊಂಡಿದ್ದಾರೆ.  ಯುವರಾಜ್ ಚನ್ನಾಗಿ ಬೌಲಿಂಗ್ ಮಾಡುತ್ತಿರುವುದು ಭಾರತಕ್ಕೆ ಅನುಕೂಲವಾಗಿದೆ. 

ಬ್ಯಾಟಿಂಗ್ ನಲ್ಲಿ  ಭಾರತದಷ್ಟು ಅದ್ಭುತವಾದ ಬ್ಯಾಟಿಂಗ್ ಲೈನ್ ಅಪ್ ಯಾವ ತಂಡದಲ್ಲೂ ಇಲ್ಲಾ , ಆದರು ಮೊನ್ನೆ ದಕ್ಷಿಣ ಆಫ್ರಿಕಾ ವಿರುದ್ದ ೨೯ ರನ್ ಗೆ ೯ ವಿಕೆಟ್ ಕಳೆದುಕೊಂಡಿದ್ದು ಇದೇ ಬ್ಯಾಟಿಂಗ್ ಲೈನ್ ಅಪ್ . ಸಚಿನ್ - ಸೆಹ್ವಾಗ್ ಉತ್ತಮ ಆರಂಭ ಕೊಟ್ಟರೂ ಉಳಿದವರು ಅದನ್ನು ಮುಂದುವರಿಸಿಕೊಂಡು ಹೋಗಲು ವಿಫಲರಾಗುತ್ತಿದ್ದಾರೆ. 

ಆಸ್ಟ್ರೇಲಿಯಾ ಗೆ ಸಚಿನ್ ಎಂದರೆ ಯಾವಾಗಲೂ ಭಯ. ಸಚಿನ್ ಆಸ್ಟ್ರೇಲಿಯಾ ವಿರುದ್ಧ ೯ ಶತಕ ಗಳಿಸಿದ್ದಾರೆ. ಅವರ ಶತಕ ಗಳ ಶತಕಕ್ಕೆ ಇನ್ನೂ ಒಂದೇ ಒಂದು ಶತಕ ಬಾಕಿ ಇದೆ. ಅದನ್ನು ಅವರು ಆಸ್ಟ್ರೇಲಿಯಾ ವಿರುದ್ಧವೇ ಮಾಡುತ್ತಾರೆ ಅಂತ ನಾವೆಲ್ಲರೂ ಕಾದುಕುಳಿತಿದ್ದೇವೆ. ಈ ವಿಶ್ವ ಕಪ್ ನಲ್ಲಿ ಅವರು ಭರ್ಜರಿ ಫಾರ್ಮ್ ನಲ್ಲಿದ್ದರೆ. ಅವರು ಶತಕ ಗಳಿಸಿ ಭಾರತಕ್ಕೆ ವಿಶ್ವ ಕಪ್  ತಂದುಕೊಡಲಿ ಅಂತ ಹಾರೈಸುತ್ತೇವೆ  

Feb 9, 2011

ವಿಶ್ವಕಪ್ ಕ್ರಿಕೆಟ್ 2011



ಇನ್ನೇನು ಒಂದು ವಾರದಲ್ಲಿ ವಿಶ್ವಕಪ್ ಕ್ರಿಕೆಟ್ ಆರಂಭವಾಗಲಿದೆ. ಕ್ರಿಕೆಟ್ ಆಡುವ ರಾಷ್ಟ್ರಗಳು ಕಡಿಮೆ ಇದ್ದರೂ, ಅದು ಭಾರತದಲ್ಲಿ, ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಹುಟ್ಟಿಸುವ craze ಮಾತ್ರ ಬೇರೆ ಎಲ್ಲಾ ಆಟಗಳಿಗಿಂತ ಜಾಸ್ತಿ.

ಹದಿನಾಲ್ಕು ವರ್ಷಗಳ ನಂತರ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಭಾರತದ ಜೊತೆ ಶ್ರೀಲಂಕ ಮತ್ತು ಬಾಂಗ್ಲಾದೇಶ ಕೂಡ ಕೆಲವೊಂದು ಪಂದ್ಯಗಳ ಆತಿಥ್ಯ ವಹಿಸುತ್ತಿವೆಧೋನಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಎರಡನೆಯ ಸ್ಥಾನದಲ್ಲಿರುವ ಭಾರತ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆಕಳೆದ ಬಾರಿಯ champion ಆಸ್ಟ್ರೇಲಿಯಾ ಈಗ ದುರ್ಭಲವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿವೆ

ನಮ್ಮ ಬೆಂಗಳೂರಿನಲ್ಲಿ ಭಾರತಕ್ಕೆಇಂಗ್ಲೆಂಡ್ ಜೊತೆಗಿನ ಪಂದ್ಯ ಅದೃಷ್ಟವಶಾತ್ಆಗಿ ಸಿಕ್ಕಿದೆ. ಕೊಲ್ಕತ್ತಾದಲ್ಲಿ ನಡೆಯಬೇಕಾಗಿದ್ದ ಪಂದ್ಯ ICC ನಿರ್ದೇಶನದಂತೆ ಬೆಂಗಳೂರಿಗೆ ಸ್ಥಳಾಂತರವಾಗಿರುವುದು ಕನ್ನಡಿಗರಿಗೆ ಸಂತಸ ತಂದಿದೆ

ಹದಿನಾಲ್ಕು ವರ್ಷಗಳ ಹಿಂದೆ ವಿಶ್ವಕಪ್  quarter final  ಭಾರತ ಮತ್ತು ಪಾಕಿಸ್ತಾನದ ಮದ್ಯೆ ಬೆಂಗಳೂರಿನಲ್ಲಿ ನಡೆದಿತ್ತು. ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಅಂದ್ರೆ ಕೇಳಬೇಕಾ? ಅಂದು ಪಾಕಿಸ್ತಾನದ ಆಮೀರ್ ಸೋಹೈಲ್ ನಮ್ಮ ವೆಂಕಟೇಶ್ ಪ್ರಸಾದ್ ಗೆ ಬೌಂಡರಿ ಹೊಡೆದು, ಮುಂದಿನ ಬಾಲಿನಲ್ಲಿ ಕೂಡ ಇದೇ ರೀತಿ ಬೌಂಡರಿ ಹೊಡೆಯುವೆ ಎಂದಿದ್ದು , ಪ್ರಸಾದ್ ಮುಂದಿನ ಚೆಂಡಿನಲ್ಲಿ ಸೋಹೈಲ್ ನನ್ನು ಬೌಲ್ಡ್ ಮಾಡಿದ್ದೂ ಎಲ್ಲರ ಕಣ್ಣುಗಳಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಇಂತಹ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ಪಂದ್ಯ ನಡೆಯುತ್ತಿರುವುದು ಕನ್ನಡಿಗರ ಅದೃಷ್ಟವೆ ಸರಿ. ಆದರೆ ಭಾರತ ತಂಡದಲ್ಲಿ ಯಾವೊಬ್ಬ ಕನ್ನಡಿಗನೂ ಇರದಿರುವುದು ಎಲ್ಲರಲ್ಲಿ ಬೇಸರ ಮೂಡಿಸಿದೆಕೊನೆಯ ಹಂತದಲ್ಲಿ ಆಯ್ಕೆಯಾದ ಶ್ರೀಶಾಂತ್ ಬದಲು ನಮ್ಮ ವಿನಯ್ ಕುಮಾರ್ ಆಯ್ಕೆ ಯಾಗಿದ್ದಾರೆ ಚೆನ್ನಾಗಿರುತ್ತಿತ್ತು

ವಿಶ್ವಕಪ್ ಬಹುಶ: ಸಚಿನ್ ತೆಂಡೂಲ್ಕರ್ ಗೆ ಕೊನೆಯ ವಿಶ್ವಕಪ್. ಬ್ಯಾಟಿಂಗ್  ಎಲ್ಲಾ records ಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿರುವ ಸಚಿನ್ ಗೆ, ವಿಶ್ವಕಪ್ ಗೆದ್ದು ಕೊಡಬೇಕೆಂಬುವುದು ತಂಡದ ಎಲ್ಲಾ ಆಟಗಾರರ ಗುರಿಯಾಗಿದೆ .

೧೯೮೩ ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿದ್ದು ಮತ್ತು ಧೋನಿ ನಾಯಕತ್ವದಲ್ಲಿ T ೨೦ ವಿಶ್ವಕಪ್ ಗೆದ್ದಿರುವುದು ಬಿಟ್ಟರೆ ಮತ್ತೊಂದು ವಿಶ್ವಕಪ್ ಗೆದ್ದಿಲ್ಲಾ.

ಪ್ರತಿ ಬಾರಿ ವಿಶ್ವಕಪ್ ಗಿಂತ ಮೊದಲು ಫೇವರಿಟ್ ಅಂತ ಕರೆಸಿಕೊಳ್ಳುವ ಭಾರತ, ಬಾರಿಯಾದರೂ ವಿಶ್ವಕಪ್ ಗೆದ್ದು ಭಾರತೀಯರಿಗೆ ಖುಷಿ ಮತ್ತು Master Blaster ಸಚಿನ್ ಗೆ dream farewell ಕೊಡಲಿ.
All the best INDIA..........